ಸುಹಾಸಿನಿ ಗಂಗೂಲಿ ಇವರು (೩ಫೆಬ್ರವರಿ ೧೯೦೯ - ೨೩ಮಾರ್ಚ್ ೧೯೬೫) ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಭಾರತೀಯ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. == ಆರಂಭಿಕ ಜೀವನ : == ಗಂಗೂಲಿಯವರು ೩ ಫೆಬ್ರವರಿ ೧೯೦೯ ರಂದು ಬ್ರಿಟಿಷ್ ಭಾರತದ ಬಂಗಾಳದ ಖುಲ್ನಾದಲ್ಲಿ ಅಬಿನಶ್ಚಂದ್ರ ಗಂಗೂಲಿ ಮತ್ತು ಸರಳಾ ಸುಂದರ ದೇವಿ ದಂಪತಿಗಳಿಗೆ ಜನಿಸಿದರು. ಅವರ ಕುಟುಂಬ ಬಂಗಾಳದ ಢಾಕಾದ ಬಿಕ್ರಂಪುರದಿಂದ ಬಂದಿತ್ತು. ಅವರು ೧೯೨೪ ರಲ್ಲಿ ಢಾಕಾ ಈಡನ್ ಶಾಲೆಯಿಂದ ಮೆಟ್ರಿಕ್ಯುಲೇಷನ್ ಪಾಸಾದರು. ಇಂಟರ್ಮೀಡಿಯೇಟ್ ಆಫ್ ಆರ್ಟ್ಸ್ ಓದುತ್ತಿದ್ದಾಗ, ಅವರು ಕಿವುಡ ಮತ್ತು ಮೂಕ ಶಾಲೆಯಲ್ಲಿ ಶಿಕ್ಷಕನ ಕೆಲಸವನ್ನು ಪಡೆದರು ಮತ್ತು ಕೋಲ್ಕತ್ತಾಗೆ ಹೋದರು. == ಕ್ರಾಂತಿಕಾರಿ ಚಟುವಟಿಕೆಗಳು : == ಕೋಲ್ಕತ್ತಾದಲ್ಲಿ ಇರುವಾಗ, ಅವರು ಕಲ್ಯಾಣಿ ದಾಸ್ ಮತ್ತು ಕಮಲಾ ದಾಸ್ಗುಪ್ತಾ ಅವರ ಸಂಪರ್ಕವನ್ನು ಪಡೆದರು. ಅವರು ಸುಹಾಸಿನಿ ಅವರನ್ನು ಜುಗಂತರ್ ಪಾರ್ಟಿಗೆ ಪರಿಚಯಿಸಿದರು. ಅವರು ಛತ್ರಿ ಸಂಘದ ಸದಸ್ಯೆಯಾದರು. ಕಲ್ಯಾಣಿ ದಾಸ್ ಮತ್ತು ಕಮಲಾ ದಾಸ್‌ಗುಪ್ತಾ ಅವರ ನಿರ್ವಹಣೆಯಲ್ಲಿ, ಗಂಗೂಲಿ ಅವರು ಛತ್ರಿ ಸಂಘದ ಪರವಾಗಿ ರಾಜಾ ಶ್ರೀಶ್ ಚಂದ್ರ ನಂದಿಯವರ ಉದ್ಯಾನದಲ್ಲಿ ಈಜು ಕಲಿಸಿದರು. ಅಲ್ಲಿ ಅವರಿಗೆ ೧೯೨೯ರಲ್ಲಿ ಕ್ರಾಂತಿಕಾರಿ ರಾಶಿಕ್ ದಾಸ್‌ನ ಪರಿಚಯವಾಯಿತು. ಬ್ರಿಟಿಷ್ ಸರ್ಕಾರವು ಅವರ ಚಟುವಟಿಕೆಗಳನ್ನು ಕಂಡುಹಿಡಿದಾಗ ಅವರು ಫ್ರೆಂಚ್ ಪ್ರದೇಶವಾಗಿದ್ದ ಚಂದನನಗರದಲ್ಲಿ ಆಶ್ರಯ ಪಡೆದರು. === ಚಿತ್ತಗಾಂಗ್ ಶಸ್ತ್ರಾಸ್ತ್ರಗಳ ದಾಳಿ : === ೧೯೩೦ ರ ಏಪ್ರಿಲ್ ೧೮ ರಂದು ಚಿತ್ತಗಾಂಗ್ ಶಸ್ತ್ರಾಗಾರದ ದಾಳಿಯ ನಂತರ, ಛತ್ರಿ ಸಂಘದ ಮುಖಂಡರ ಸೂಚನೆಯ ಮೇರೆಗೆ, ಶಶಧರ್ ಆಚಾರ್ಯ ಮತ್ತು ಗಂಗೂಲಿ, ಪತಿ ಮತ್ತು ಹೆಂಡತಿಯ ವೇಷದಲ್ಲಿ ಮೇ ೧೯೩೦ ರಲ್ಲಿ ಅನಂತ ಸಿಂಗ್, ಲೋಕನಾಥ್ ಬಾಲ್, ಆನಂದ ಗುಪ್ತಾ, ಜಿಬಾನ್ ಘೋಷಾಲ್ ಅವರಿಗೆ ಆಶ್ರಯ ನೀಡಿದರು ( ಮಖನ್). ಸೆಪ್ಟೆಂಬರ್ ೧, ೧೯೩೦ ರಂದು, ಬ್ರಿಟಿಷ್ ಪೊಲೀಸರು ಅವರ ಮನೆಯ ಮೇಲೆ ದಾಳಿ ಮಾಡಿದರು ಮತ್ತು ಗುಂಡಿನ ಚಕಮಕಿ ನಡೆಯಿತು. ಜಿಬನ್ ಘೋಷಾಲ್ ಮತ್ತು ಶ್ರೀಮತಿ ಸೇರಿದಂತೆ ಇತರ ಕ್ರಾಂತಿಕಾರಿಗಳು ಗುಂಡಿನ ಚಕಮಕಿಯಲ್ಲಿ ಸತ್ತರು. ಗಂಗೂಲಿಯವರನ್ನು ವಶ ಪಡಿಸಿಕೊಳ್ಳಲಾಯಿತು. ಆದರೆ ಶೀಘ್ರದಲ್ಲೇ ಅವರನ್ನು ಬಿಡುಗಡೆ ಮಾಡಲಾಯಿತು. === ಇತರ ಚಟುವಟಿಕೆಗಳು : === ಅವರು ೧೯೩೨ರಲ್ಲಿ ಬಂಗಾಳದ ಗವರ್ನರ್ ಸ್ಟಾನ್ಲಿ ಜಾಕ್ಸನ್ ಅವರನ್ನು ಹತ್ಯೆ ಮಾಡಲು ಯತ್ನಿಸಿದ ಬೀನಾ ದಾಸ್ ಅವರೊಂದಿಗೆ ಸಂಬಂಧ ಹೊಂದಿದ್ದರು. ಬಂಗಾಳದ ಕ್ರಿಮಿನಲ್ ಕಾನೂನು ತಿದ್ದುಪಡಿ () ಕಾಯಿದೆಯ ಅಡಿಯಲ್ಲಿ, ಗಂಗೂಲಿಯನ್ನು ೧೯೩೨ ರಿಂದ ೧೯೩೮ ರವರೆಗೆ ಹಿಜ್ಲಿ ಬಂಧನ ಶಿಬಿರದಲ್ಲಿ ಬಂಧಿಯಾಗಿರಿಸಲಾಗಿತ್ತು. ಬಿಡುಗಡೆಯ ನಂತರ, ಅವರು ಭಾರತದ ಕಮ್ಯುನಿಸ್ಟ್ ಚಳವಳಿಯಲ್ಲಿ ಭಾಗವಹಿಸಿದರು. ಅವರು ಭಾರತದ ಕಮ್ಯುನಿಸ್ಟ್ ಭಾಗದ ಮಹಿಳಾ ಮುಂಭಾಗಕ್ಕೆ ಲಗತ್ತಿಸಿದ್ದರು. ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಭಾಗವಹಿಸದ ಕಾರಣ ಅವರು ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸದಿದ್ದರೂ, ಅವರು ತಮ್ಮ ಕಾಂಗ್ರೆಸ್ ಸಹೋದ್ಯೋಗಿಗಳಿಗೆ ಸಹಾಯ ಮಾಡಿದರು. ಕ್ವಿಟ್ ಇಂಡಿಯಾ ಚಳವಳಿಯ ಕಾರ್ಯಕರ್ತ ಹೇಮಂತ ತರಫ್ದಾರ್‌ಗೆ ಆಶ್ರಯ ನೀಡಿದ್ದರಿಂದ ಆಕೆಯನ್ನು ೧೯೪೨ ಮತ್ತು ೧೯೪೫ ರ ನಡುವೆ ಮತ್ತೆ ಜೈಲಿನಲ್ಲಿ ಬಂಧಿಸಲಾಯಿತು. ೧೯೪೮ರ ಪಶ್ಚಿಮ ಬಂಗಾಳ ಭದ್ರತಾ ಕಾಯಿದೆಯಡಿ ೧೯೪೮ ಮತ್ತು ೧೯೪೯ ರಲ್ಲಿ ಗಂಗೂಲಿ ಅವರು ಕಮ್ಯುನಿಸಂನೊಂದಿಗಿನ ತನ್ನ ಬಾಂಧವ್ಯಕ್ಕಾಗಿ ಹಲವಾರು ತಿಂಗಳುಗಳ ಕಾಲ ಜೈಲಿನಲ್ಲಿದ್ದರು. == ನಂತರ ಜೀವನ ಮತ್ತು ಸಾವು == ಗಂಗೂಲಿ ಅವರು ತಮ್ಮ ಜೀವನದುದ್ದಕ್ಕೂ ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡಿದ್ದರು. ೧೯೬೫ ರಲ್ಲಿ ರಸ್ತೆ ಅಪಘಾತದಿಂದಾಗಿ ಅವರು ಕೋಲ್ಕತ್ತಾದ ಪಿಜಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ನಿರ್ಲಕ್ಷ್ಯದ ಕಾರಣದಿಂದಾಗಿ, ಅವರು ಧನುರ್ವಾಯು ಸೋಂಕಿಗೆ ಒಳಗಾದರು ಮತ್ತು ೨೩ ಮಾರ್ಚ್ ೧೯೬೫ರಂದು ಸಾವನ್ನಪ್ಪಿದರು. == ಉಲ್ಲೇಖಗಳು : ==